ಗುರುವಾರ, ಏಪ್ರಿಲ್ 2, 2015

ಎನ್ನ ಭಾವದ ಕಡಲು.....!!

ಎನ್ನ ಭಾವದ ಕಡಲು
ಉಕ್ಕುಕ್ಕಿ  ಹರಿದಾಗ
ಅಕ್ಷರದ ಅಲೆಯಾಯಿತು..!
ಆ ಅಲೆಯೇ ಹೃದಯದೊಳು
ಸಾಲಾಗಿ ಅಪ್ಪಳಿಸಿ,
ಕಾವ್ಯಗಳ ಸೆಲೆಯಾಯಿತು..!!


ಇದು ಬರಿಯ ಸೆಲೆಯಲ್ಲ.,
ಬಿಡಿಸಲಾಗದ ಸೆಳೆತ...
ಸುಳಿಯೊಳಗೆ ನಾ ಸಿಲುಕಿದೆ..!
ಹುಚ್ಚು ಹಿಡಿಸಿತು ಕವಿತೆ
ಗೀಳೇ ಆಯಿತು ಕೊನೆಗೆ.,
ಅಚ್ಚಳಿಯದೇ ಉಳಿದಿದೆ..!!


ಕವಿಯ ಭಾವದ ಲಹರಿ
ಬಣ್ಣ ಬಣ್ಣದ  ತೀರ್ಥ.,
ಕುಡಿದಷ್ಟೂ ಹಿತ ಅನುಭವ..!
ಮೀಯುತಲೇ ಇರಬೇಕು.,
ತೋಯುತಲೇ ಇರಬೇಕು.,
ಇದರಂಬುಧಿ ಸಾರವ....!!

2 ಕಾಮೆಂಟ್‌ಗಳು: